ಕರಾವಳಿ

ಸರ್ವೆ ಕಲ್ಪಣೆ ಪ್ರಾ.ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಕೆ.ಎಂ ಹನೀಫ್ ರೆಂಜಲಾಡಿ ಪುನರಾಯ್ಕೆ

ಪುತ್ತೂರು: ಸರ್ವೆ ಕಲ್ಪಣೆ ಸ.ಹಿ.ಪ್ರಾ.ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಕೆ.ಎಂ ಹನೀಫ್ ರೆಂಜಲಾಡಿ ಪುನರಾಯ್ಕೆಗೊಂಡಿದ್ದಾರೆ.

ಜ.27ರಂದು ಸರ್ವೆ ಕಲ್ಪಣೆ ಸ.ಹಿ.ಪ್ರಾ.ಶಾಲೆಯಲ್ಲಿ ನಡೆದ ಸಭೆಯಲ್ಲಿ ನೂತನ ಎಸ್‌ಡಿಎಂಸಿ ರಚನೆಯನ್ನು ಮಾಡಲಾಯಿತು.

ಮುಂಡೂರು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್ ಎನ್.ಎಸ್.ಡಿ ಅಧ್ಯಕ್ಷತೆ ವಹಿಸಿದ್ದರು. ಮುಂಡೂರು ಗ್ರಾ.ಪಂ ಸದಸ್ಯ ಮಹಮ್ಮದ್ ಆಲಿ ನೇರೋಳ್ತಡ್ಕ ಉಪಸ್ಥಿತರಿದ್ದರು.

ಉಪಾಧ್ಯಕ್ಷರಾಗಿ ಮೀನಾಕ್ಷಿ ಸೊರಕೆ ಆಯ್ಕೆಯಾದರು. ಸಮಿತಿ ಸದಸ್ಯರುಗಳಾಗಿ ಗಣೇಶ್ ನೆರೋಳತಡ್ಕ, ಕೃಷ್ಣಪ್ಪ, ಪೂರ್ಣಿಮಾ, ಗಿರಿಜಾ, ಚಂದ್ರಶೇಖರ ನೆಕ್ಕಿಲು, ಹಂಝ ಕೂಡುರಸ್ತೆ, ಯೂಸುಫ್ ಸೊರಕೆ, ಉಮ್ಮರ್ ಸೊರಕೆ, ಅಶುರ ಕೂಡುರಸ್ತೆ, ಸುಮಯ್ಯ ಬಾಳಾಯ, ಹಾಜಿರ, ಫೌಝಿಯಾ, ರಹಮತ್, ಜಯಪ್ರಕಾಶ್ ರೈ, ಗೀತಾ ಆಯ್ಕೆಯಾದರು. ಪದನಿಮಿತ್ತ ಸದಸ್ಯರುಗಳಾಗಿ ಅಂಗನವಾಡಿ ಶಿಕ್ಷಕಿ ಪುಷ್ಪ, ಆಶಾ ಕಾರ್ಯಕರ್ತೆ ರಾಜೀವಿ, ಆರೋಗ್ಯ ಸಹಾಯಕಿ ಹೇಮಲತಾ ಆಯ್ಕೆಯಾದರು.

ನಾಮ ನಿರ್ದೇಶಕ ಸದಸ್ಯರಾಗಿ ಮುಂಡೂರು ಗ್ರಾ.ಪಂ ಸದಸ್ಯ ಮಹಮದ್ ಅಲಿ, ಶಾಲಾ ಮುಖ್ಯಗುರು ಕಮಲ ಕೆ, ಶಾಲಾ ನಾಯಕಿ ರಕ್ಷಾ ಆಯ್ಕೆಯಾದರು. ಶಾಲಾ ಮುಖ್ಯಗುರು ಕಮಲ ಕೆ ಪ್ರಸ್ತಾವನೆಗೈದರು. ಶಿಕ್ಷಕಿ ಉಮಾವತಿ ಎಸ್ ಸ್ವಾಗತಿಸಿದರು. ಶಿಕ್ಷಕಿ ಅನಿತಾ ವಂದಿಸಿದರು. ಶಿಕ್ಷಕಿ ಜ್ಯೋತಿ ಸಿ.ಜಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಸತೀಶ್, ದೀಕ್ಷಾ, ಅವಿತ ಸಹಕರಿಸಿದರು.

Leave a Reply

Your email address will not be published. Required fields are marked *

error: Content is protected !!