ಕರಾವಳಿಕ್ರೈಂ

ಸುಳ್ಯ: ರಸ್ತೆ ಬದಿಯಲ್ಲಿದ್ದ ಕಬ್ಬು ಜ್ಯೂಸ್ ನ ಮೆಷಿನ್ ಕದ್ದೊಯ್ದ ಖದೀಮರು





ಸುಳ್ಯ ಮಾವಿನಕಟ್ಟೆ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ದ್ವಾರದ ಎದುರುಗಡೆ ರಸ್ತೆಯ ಬದಿ ಕಳೆದ 2 ತಿಂಗಳಿನಿಂದ ಕಬ್ಬು ಜ್ಯೂಸ್ ತಯಾರಿಸುತ್ತಿದ್ದ ಮೆಷಿನ್ ನ್ನು ಫೆ.10ರ ರಾತ್ರಿ ಕಳ್ಳರ ತಂಡ ಕದ್ದೊಯ್ದ ಘಟನೆ ನಡೆದಿದ್ದು, ಪ್ರಕರಣ ಮಾ 11 ರಂದು ಬೆಳಕಿಗೆ ಬಂದ ಬಗ್ಗೆ ವರದಿಯಾಗಿದೆ.



ತಳೂರಿನ ಆನಂದ ಎಂಬವರು ಕಬ್ಬು ಹಾಲಿನ ಮೆಷಿನ್ ಖರೀದಿಸಿ ಮಾವಿನಕಟ್ಟೆ ಮಹಾವಿಷ್ಣು ದ್ವಾರದ ಎದುರು ಸೋಣಂಗೇರಿ – ಗುತ್ತಿಗಾರು ಮುಖ್ಯ ರಸ್ತೆ ಬದಿ ಇಟ್ಟು ಕಳೆದ 2 ತಿಂಗಳಿನಿಂದ ವ್ಯಾಪಾರ ನಡೆಸುತ್ತಿದ್ದರು. ಇಲ್ಲಿ ಹೆಚ್ಚಾಗಿ ಇವರ ಮಕ್ಕಳು ಇರುತ್ತಿದ್ದು
ನಿನ್ನೆ ಬೆಳಿಗ್ಗೆ ವ್ಯಾಪಾರ ನಡೆಸಲು ಅಲ್ಲಿಗೆ ಹೋದಾಗ ಮೆಷಿನ್ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.


ಈ ಬಗ್ಗೆ ಪೋಲೀಸ್ ದೂರು ನೀಡಿರುವುದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!