ಕರಾವಳಿ

ಪುತ್ತೂರು: ರೈಲ್ವೆ ಹಳಿಯಲ್ಲಿ ಮಲಗಿ ವಿಶ್ರಾಂತಿ ಪಡೆದ ವ್ಯಕ್ತಿ…!



ಪುತ್ತೂರು: ರೈಲ್ವೇ ಹಳಿಯಲ್ಲೇ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ವ್ಯಕ್ತಿಯೋರ್ವರನ್ನು ರೈಲ್ವೇ ಪೊಲೀಸರು ಬಂಧಿಸಿ ದಂಡ ವಿಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಘಟನೆ ಅ.27ರಂದು ಪುತ್ತೂರಿನಲ್ಲಿ ನಡೆದಿದೆ.

ಪಡ್ಡಾಯೂರು ನಿವಾಸಿ ಕೂಲಿ ಕಾರ್ಮಿಕ ದಿನೇಶ್ ಬಂಧಿತ ವ್ಯಕ್ತಿ. ಅವರು ಅ.25ರಂದು ರಾತ್ರಿ ಮುರ ರೈಲ್ವೇ ಹಳಿಯಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದರು. ಅದೇ ಸಮಯ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಪ್ಯಾಸೆಂಜರ್ ರೈಲು ಬಂದಿದ್ದು ಇದನ್ನು ಗಮನಿಸಿದ ಸ್ಥಳೀಯರು ದಿನೇಶ್‌ರವರನ್ನು ಎಚ್ಚರಿಸಿ ರೈಲ್ವೇ ಹಳಿಯಿಂದ ಬದಿಗೆ ಸರಿಸಿದ್ದರು. ಬಳಿಕ ಇದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಸಾಮಾಜಿಕ ಕಾರ್ಯಕರ್ತರೊಬ್ಬರು ಘಟನೆಯ ಕುರಿತು ರೈಲ್ವೇ ಸೇವಾ ಕೇಂದ್ರಕ್ಕೆ ಟ್ವಿಟ್ ಮಾಡಿದ್ದರು.

ತಕ್ಷಣ ಕಾರ್ಯಪ್ರವೃತರಾದ ರೈಲ್ವೇ ಪೊಲೀಸರು ಮುರಕ್ಕೆ ಬಂದು ವಿಚಾರಣೆ ನಡೆಸಿ ರೈಲ್ವೆ ಹಳಿಯಲ್ಲಿ ಮಲಗಿದ್ದ ದಿನೇಶ್‌ರವರನ್ನು ಬಂಧಿಸಿದ್ದರು. ದಿನೇಶ್‌ರವರು ರೈಲ್ವೇ ಸೊತ್ತಿನಲ್ಲಿ ಅಕ್ರಮವಾಗಿ ಪ್ರವೇಶಿಸಿದಲ್ಲದೆ ದುರು ಪಯೋಗಪಡಿಸಿಕೊಂಡ ಬಗೆ ಪ್ರಕರಣ ದಾಖಲಿಸಿ ರೈಲ್ವೇ ಆಕ್ಟ್ ಪ್ರಕಾರ ದಂಡ ವಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ವ್ಯಕ್ತಿಗೆ ನ್ಯಾಯಾಂಗ ಬಂಧನ ವಿಧಿಸುವುದಾಗಿ ತಿಳಿದ ಬಂದಿದೆ.

Leave a Reply

Your email address will not be published. Required fields are marked *

error: Content is protected !!