12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ವಿಟ್ಲ: 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

2012ರ ಅಬಕಾರಿ ಜ್ಯಾರಿ ಮತ್ತು ಲಾಟರಿ ನಿಷೇಧ ದಳ ಪೊಲೀಸ್ ಠಾಣಾ ಅ.ಕ್ರ 40/2012 ಕಲಂ 32,34 ಕೆ.ಇ ಆಕ್ಟ್ ಹಾಗೂ 87/2012 ಕಲಂ 32,34 ಕೆ.ಇ ಆಕ್ಟ್ ಪ್ರಕರಣದಲ್ಲಿ ಸುಮಾರು 12 ವರುಷಗಳಿಂದ ತಲೆಮರೆಸಿಕೊಂಡಿರುವ ಪೆರುವಾಯಿ ಗ್ರಾಮದ ಸತ್ಯ ಯಾನೆ ಸತೀಶ್ (42) ಎಂಬಾತನನ್ನು ಜು. 23ರಂದು ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.