ಕರಾವಳಿರಾಜಕೀಯ

ಕೆದಂಬಾಡಿ:  ಕಾಂಗ್ರೆಸ್  ಸಭೆ




ಪುತ್ತೂರು: ಕೆದಂಬಾಡಿ  ಕಾಂಗ್ರೆಸ್  ಬೂತ್ ಸಂಖ್ಯೆ 188ರ ಸಭೆ ಅಧ್ಯಕ್ಷ ಹಬೀಬ್ ಕಣ್ಣೂರು ಅಧ್ಯಕ್ಷತೆಯಲ್ಲಿ ನಡೆಯಿತು.
ಪಕ್ಷ ಸಂಘಟನೆ, ಶಾಸಕರ ಅನುದಾನ ಬಗ್ಗೆ, ಮಹಿಳಾ ಕಾಂಗ್ರೆಸ್ ಸಮಿತಿ, ಯೂತ್ ಕಾಂಗ್ರೆಸ್ ಸಮಿತಿ ರಚಿಸುವ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಕೆದಂಬಾಡಿ  ವಲಯ ಅಧ್ಯಕ್ಷ ಪುರಂದರ ರೈ ಕೋರಿಕ್ಕಾರು, ಹಿರಿಯ ಕಾಂಗ್ರೆಸ್ ಮುಖಂಡ ಚಂದ್ರಹಾಸ ರೈ   ಬೋಳೋಡಿ,  ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರು, ಕೆದಂಬಾಡಿ ಉಸ್ತುವಾರಿ ಆಗಿರುವ  ಮನೋಹರ ರೈ ಎಂಡಸಾಂಗ್, ಉಪಸ್ಥಿತರಿದ್ದರು. ನಿಕಟಪೂರ್ವ ಕಾರ್ಯದರ್ಶಿ ಸಂದೇಶ್ ಪೂಜಾರಿ ಸ್ವಾಗತಿಸಿ ವಂದಿಸಿದರು. ಬೂತ್ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!