ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲರಾದ ಇಬ್ರಾಹಿಂರವರಿಗೆ ಅಭಿನಂದನೆ
ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ನೇಮಕಗೊಂಡ ಇಬ್ರಾಹಿಂ ರವರನ್ನು ಪುತ್ತೂರು ಎಜುಕೇಶನಲ್ ಎಕ್ಷಲೆನ್ಸ್ ಫೌಂಡೇಶನ್ ಇದರ ಅಧ್ಯಕ್ಷರಾದ ಅಮ್ಜದ್ ಖಾನ್ ಪೋಳ್ಯರವರು ಅಭಿನಂದಿಸಿ ಶುಭ ಹಾರೈಸಿದರು. ಕಾಲೇಜಿನ ಸಾಧನೆಗಳನ್ನು ಇದೇ ವೇಳೆ ಅಮ್ಜದ್ ಖಾನ್ ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷರಾದ ಅಜೀಜ್ ಬಸ್ತಿಕಾರ್, ಉಪನ್ಯಾಸಕರಾದ ರಮೇಶ್ ಎಚ್ ಜೆ, ಆಯಿಶಾ ಬಸ್ತಿಕಾರ್, ತಸ್ನಿ ಮೂಸಾ ಜೊತೆಗಿದ್ದರು.





