ಕರಾವಳಿ

ಪುತ್ತೂರು: ಚಿನ್ನದ ಸರ ಕಳ್ಳತನ-ಪ್ರಕರಣ ದಾಖಲು



ಪುತ್ತೂರು: ಜ್ಯುವೆಲ್ಲರಿಯೊಂದರಿಂದ ಚಿನ್ನದ ಸರ ಖರೀದಿಸಿ ಬಸ್‌ನಲ್ಲಿ ಹಿಂತಿರುಗುತ್ತಿದ್ದ ವೇಳೆ ಚಿನ್ನದ ಸರ ಇದ್ದ ಬ್ಯಾಗನ್ನು ಕಳವುಗೈದ ಘಟನೆ ವರದಿಯಾಗಿದೆ.

ಪುತ್ತೂರು ಕಸಬಾ ಗ್ರಾಮದ ಜಯರಾಮ ಭಟ್ ಪಿ. ಎಂಬವರು ಜ.19ರಂದು ಮಂಗಳೂರಿನ ಜ್ಯುವೆಲ್ಲರಿಯಿಂದ ರೂ. 1,60,436/- ಮೌಲ್ಯದ 23.970 ಗ್ರಾಂ ಚಿನ್ನ ಚೈನ್ ಖರೀದಿಸಿದ್ದು, ಈ ಚಿನ್ನದ ಚೈನ್‌ನ್ನು ಬ್ಯಾಗ್‌ನಲ್ಲಿರಿಸಿ ಕೆ.ಎಸ್.ಆರ್.ಟಿ.ಸಿ ಬಸ್ ಮೂಲಕ ಪುತ್ತೂರಿಗೆ ಪ್ರಯಾಣಿಸುತ್ತಿದ್ದ ವೇಳೆ ಬಸ್ ನಿಲ್ದಾಣದಿಂದ ಹೊರಟು ಮಂಗಳೂರು ಬಂಟ್ಸ್ ಹಾಸ್ಟೆಲ್ ಬಳಿ ತಲುಪಿದಾಗ ಬಸ್ ಪ್ರಯಾಣಿಕರಿಂದ ಭರ್ತಿಯಾಗಿದ್ದು, ಈ ವೇಳೆ ವ್ಯಕ್ತಿಯ ಪಕ್ಕದಲ್ಲಿ ಕುಳಿತಿದ್ದ ಅಪರಿಚಿತ ಹೆಂಗಸಿನ ಕೈಯಲ್ಲಿದ್ದ ಚಿಲ್ಲರೆ ಹಣವನ್ನು ಕೆಳಗಡೆ ಬೀಳಿಸಿ ಅವರ ಗಮನವನ್ನು ಬೇರೆಡೆಗೆ ಸೆಳೆದಿರುತ್ತಾರೆ ಹಾಗೂ ಅಪರಿಚಿತ ಹೆಂಗಸು ಮಗುವಿನ ಜೊತೆ ಜಯರಾಮ ಭಟ್ ರವರು ಹಿಡಿದುಕೊಂಡಿದ್ದ ಬ್ಯಾಗ್‌ನ ಮೇಲೆ ಬಿದ್ದಿರುತ್ತಾರೆ.

ಆ ಬಳಿಕ ಮಹಿಳೆ ಇನ್ನೋರ್ವ ಮಹಿಳೆಯೊಂದಿಗೆ ಜ್ಯೋತಿ ಸರ್ಕಲ್ ಬಳಿ ಬಸ್‌ನಿಂದ ಇಳಿದುಹೋಗಿರುತ್ತಾರೆ. ವ್ಯಕ್ತಿಯು ಪುತ್ತೂರು ತಲುಪಿ ಮನೆಗೆ ಬಂದು ಬ್ಯಾಗ್ ನೋಡಿದಾಗ ಮಂಗಳೂರಿನಿಂದ ಖರೀದಿಸಿ ತಂದಿದ್ದ ಚಿನ್ನದ ಸರ ಇದ್ದ ಬ್ಯಾಗ್ ಕಳ್ಳತನವಾಗಿರುತ್ತದೆ ಎಂದು ತಿಳಿದುಬಂದಿದೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!