ಕಡಬ: ಆಡನ್ನು ಕೊಂಡೊಯ್ದು ತಿಂದು ರಬ್ಬರ್ ಮರದ ಕೊಂಬೆಯ ಮೇಲೆ ಇಟ್ಟ ಚಿರತೆ..!
ಚಿರತೆಯೊಂದು ಆಡನ್ನು ಕೊಂಡೊಯ್ದು ಕೆಲಭಾಗ ತಿಂದು ಬಳಿಕ ಕಾಡಿನಲ್ಲಿ ರಬ್ಬರ್ ಮರದ ಕೊಂಬೆಯ ಮೇಲೆ ಇಟ್ಟ ಘಟನೆ ಕಡಬ ಸಮೀಪದ ಬೆತ್ತೋಡಿಯಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆತ್ತೋಡಿ ಕಾಲನಿಯ ಕೆ ಎಫ್ ಡಿ ಸಿ ನಿಗಮದ ರಬ್ಬರ್ ತೋಟದಲ್ಲಿ ಈ ದೃಶ್ಯ ಕಂಡು ಬಂದಿದ್ದು ರಬ್ಬರ್ ಟ್ಯಾಂಪಿಂಗ್ ಗೆ ಬಂದ ವ್ಯಕ್ತಿಯೊಬ್ಬರು ವೀಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದಾರೆ.
ಬೆತ್ತೋಡಿ ಕಾಲೋನಿಯ ದೂರದ ಪ್ರದೇಶಗಳಲ್ಲಿ ಚಿರತೆ ಓಡಾಟ ಇದ್ದು ಈ ಹಿಂದೆಯೂ ಈ ಭಾಗದಲ್ಲಿ ಆಡನ್ನು ಚಿರತೆ ಭೇಟೆಯಾಡಿದ ಬಗ್ಗೆ ಸುದ್ದಿಯಾಗಿತ್ತು.
ಆಡನ್ನು ಭೇಟೆಯಾಡಿದ ಚಿರತೆ ಮನುಷ್ಯರ ಮೇಲೂ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತ ಪಡಿಸಿದ್ದಾರೆ.ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಜರಗಿಸುವಂತೆ ಆಗ್ರಹಿಸಿದ್ದಾರೆ.