ಗಾಳಿಮುಖ ಪುದಿಯವಳಪ್ಪ್ ಮಖಾಂ ಉರೂಸ್ ಸಂಪನ್ನ:
ಸಾವಿರಾರು ಮಂದಿಗೆ ಅನ್ನದಾನ
ಪುತ್ತೂರು: ದ. ಕ ಜಿಲ್ಲೆಯಲ್ಲಿ ಪ್ರಸಿದ್ದಿ ಹೊಂದಿರುವ ಝಿಯಾರತ್ ಕೇಂದ್ರದಲ್ಲಿ ಒಂದಾದ ಗಾಳಿಮುಖ ಪುದಿಯವಳಪ್ಪ್ ಮಖಾಂ ಉರೂಸ್, 9 ದಿನಗಳ ಧಾರ್ಮಿಕ ಮತಪ್ರಸಂಗ ಕಾರ್ಯಕ್ರಮದೊಂದಿಗೆ ಫೆ.12 ರಂದು ಸಂಪನ್ನಗೊಂಡಿತು.

ಫೆ.3ರಂದು ಉರೂಸ್ ಉದ್ಘಾಟನೆಗೊಂಡು ಅಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಯ್ಯಿದ್ ಟಿ ವಿ ಹಕೀಮ್ ತಂಙಳ್ ಆದೂರು ವಹಿಸಿದ್ದರು. ಪುದಿಯವಳಪ್ಪ್ ಮಸ್ಜಿದ್ ಖತೀಬ್ ಉಮರುಲ್ ಫಾರೂಕ್ ದಾರಿಮಿ ಮುಖ್ಯ ಪ್ರಭಾಷಣ ನೆರವೇರಿಸಿದರು.
ಫೆ.೪ರಂದು ಖ್ಯಾತ ವಾಗ್ಮಿ ಲುಕುಮಾನುಲ್ ಹಕೀಮ್ ಪುಲ್ಲಾರ ಮುಖ್ಯ ಪ್ರಭಾಷಣಕಾರರಾಗಿ ನಡೆಸಿದರು. ಫೆ.5ರಂದು ಅಂತರಾಷ್ಟ್ರೀಯ ಖ್ಯಾತಿ ಪಡೆದ ವಾಗ್ಮಿ ಆಶಿಕ್ ದಾರಿಮಿ ಆಲಪ್ಪುಝ ಮುಖ್ಯ ಪ್ರಭಾಷಣ ಮಾಡಿದರು.

ಫೆ.6ರಂದು ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್ ಅಹ್ದಲ್ ಮುತ್ತನ್ನೂರು ತಂಙಳ್ ಸಾಮೂಹಿಕ ದುವಾ ಪ್ರಾರ್ಥನೆ ನಡೆಸಿ ಪ್ರಭಾಷಣ ನೀಡಿದರು. ಫೆ.7ರಂದು ಖ್ಯಾತ ವಾಗ್ಮಿ ಅಬ್ದುಲ್ ಸಲೀಂ ವಾಫಿ ಮುಖ್ಯ ಪ್ರಭಾಷಣ ನಡೆಸಿದರು.
ಫೆ.8ರಂದು ಅಸ್ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ದುವಾ ನೇತೃತ್ವವವನ್ನು ನಿರ್ವಹಿಸಿ ಶಮೀರ್ ದಾರಿಮಿ ಕೊಲ್ಲಂ ಮುಖ್ಯ ಪ್ರಭಾಷಣಗೈದರು. ಫೆ.9ರಂದು ಸಂಜೆ ಸ್ವಲಾತ್ ಕಾರ್ಯಕ್ರಮ ನಡೆಯಿತು. ಇದರ ನೇತೃತ್ವವನ್ನು ಅಸ್ಸಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ವಹಿಸಿದ್ದರು. ರಾತ್ರಿ ನಡೆದ ಧಾರ್ಮಿಕ ಪ್ರಭಾಷಣವನ್ನು ಮಶ್ಹೂದ್ ಸಖಾಫಿ ಗೂಡಲ್ಲೂರು ನಿರ್ವಹಿಸಿದರು. ಫೆ.10ರಂದು ಸ್ವಾಲಿಹ್ ಹುದವಿ ತೂದ ಮಲಪುರಂ ಧಾರ್ಮಿಕ ಪ್ರಭಾಷಣ ನಡೆಸಿದರು.
ಫೆ.11ರಂದು ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪುದಿಯವಳಪ್ಪ್ ಜಮಾಅತ್ ಕಮಿಟಿ ಗೌರವಾಧ್ಯಕ್ಷ ಹಾಜಿ ಅಬ್ದುಲ್ಲ ಕುಂಞಿ ವಹಿಸಿದ್ದರು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಅಸ್ಸಯ್ಯಿದ್ ಹಮೀದಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ನೆರವೇರಿಸಿ ದುವಾ ಸಂಗಮಕ್ಕೆ ನೇತೃತ್ವ ನೀಡಿದರು. ಮುಖ್ಯ ಪ್ರಭಾಷಣವನ್ನು ಪಿ ಕೆ ಬಾದುಷಾ ಸಖಾಪಿ ಆಲಪ್ಪುಝ ಮಾಡಿದರು. ವೇದಿಕೆಯಲ್ಲಿ ಸಯ್ಯಿದ್ ಇಂಬ್ಬಿಚ್ಚಿಕೋಯ ತಂಙಳ್, ಉಮರುಲ್ ಫಾರೂಕ್ ದಾರಿಮಿ, ಸ್ಥಳಿಯ ಮಸೀದಿ ಅಧ್ಯಕ್ಷ ಪಿ ಎ ಅಬೂಬಕರ್, ಮೊಹಮ್ಮದ್ ಮುಸ್ಲಿಯರ್ ಮೊದಲಾದವರು ಉಪಸ್ಥಿತರಿದ್ದರು.
ಫೆ.12ರಂದು ಸಂಜೆ ಮೌಲೀದ್ ಪಾರಾಯಣದ ಬಳಿಕ ಸಾವಿರಾರು ಭಕ್ತರಿಗೆ ಅನ್ನದಾನ ಕಾರ್ಯಕ್ರಮ ನಡೆಯಿತು. ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳ ವೇದಿಕೆಯಲ್ಲಿ ಸ್ವಾದಿಕ್ ಹಿಮಮಿ ಸಖಾಫಿ, ಶಫೀಕ್ ಸಅದಿ, ಅಬ್ದುಲ್ ಹಮೀದ್ ಅರ್ಶದಿ, ಅಬ್ದುಲ್ ರೆಹಮಾನ್ ಸಖಾಫಿ, ಆದಂ ದಾರಿಮಿ, ಅಬ್ದುಲ್ ರೆಹಮಾನ್ ಸಖಾಫಿ, ಆಶಿಫ್ ಹನೀಫಿ, ಅಬ್ದುಲ್ಲಾ ಬಾಖವಿ ಜಿ.ವೈ ಉಪಸ್ಥಿತರಿದ್ದರು.
ಗೌರವಾರ್ಪಣೆ: ಉರೂಸ್ ಕಾರ್ಯಕ್ರಮಕ್ಕೆ ಸಹಕರಿಸಿದ ಗೌರವಾಧ್ಯಕ್ಷ ಅಬ್ದುಲ್ಲಾ ಕುಂಞಿ, ಅಧ್ಯಕ್ಷರಾದ ಅಬೂಬಕ್ಕರ್, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಹಾಜಿ, ಪುದಿಯವಳ್ಳಪ್ಪು ದರ್ಗಾ ಹಾಗೂ ಮಸೀದಿಯಲ್ಲಿ 30 ವರ್ಷಗಳಿಂದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಶಾಫಿ ಜಿ.ಕೆ ಅವರಿಗೆ, ಶಿಹಾಬ್ ಎನ್.ಎ, ಕೋಶಾಧಿಕಾರಿ ಅಶ್ರಫ್ ಜಿ ಕೆ, ಉಪಾಧ್ಯಕ್ಷ ಮೂಸಾ ಜಿ ಹಾಗೂ ಸ್ಥಳೀಯರಾದ ಡಾ. ಕಾರ್ತಿಕ್, ಮತ್ತು ಟೈಲರ್ ರಾಮನ್ರವರನ್ನು ಜಮಾಅತ್ ಮತ್ತು ಉರೂಸ್ ಕಮಿಟಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
