ಪ್ರವೀಣ್ ನೆಟ್ಟಾರು ಕೊಲೆ ಆರೋಪಿಯಾಗಿರುವ ಶಾಫಿ ಬೆಳ್ಳಾರೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಡಿ- ಪುತ್ತೂರು ಶಾಸಕ ಸಂಜೀವ ಮಠಂದೂರು ಆಗ್ರಹ
ಪುತ್ತೂರು: ನಮ್ಮ ಪಕ್ಷದ ಕಾರ್ಯಕರ್ತ ದಿವಂಗತ ಪ್ರವೀಣ್ ನೆಟ್ಟಾರ್ ಅವರ ಕೊಲೆಯ ಆರೋಪದ ಮೇಲೆ NIA ಮೂಲಕ ಸೂಕ್ತ ಸಾಕ್ಷ್ಯ ಮತ್ತು ಆಧಾರದೊಂದಿಗೆ ಬಂಧಿತನಾಗಿ ಜೈಲು ಸೇರಿಸುವ ಶಾಫಿ ಬೆಳ್ಳಾರೆ ಎಂಬ ದೂರ್ತ SDPI ಪಕ್ಷ ಪುತ್ತೂರು ವಿಧಾನಸಭಾ ಕ್ಷೇತ್ರದ ತನ್ನ ಉಮೇದುವಾರಿಕೆಯನ್ನು ಘೋಷಣೆ ಮಾಡಿ ತಾನೊಂದು ರಾಜಕೀಯ ಪಕ್ಷ ಎಂದು ಹೇಳಿಕೊಳ್ಳುತ್ತಿದ್ದ ಈ ಭಯೋತ್ಪಾದಕ ಸಂಘಟನೆಯ ಮುಖವಾಡ ಕಳಚಿ ಬಿದ್ದಿದ್ದು ಯಾವುದೇ ಕಾರಣಕ್ಕೂ ಶಾಫಿ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದೆಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಆಗ್ರಹಿಸಿದ್ದಾರೆ.
ಅದರ ಮುಂದುವರೆದ ಭಾಗವಾಗಿ ಈ ಶಾಫಿ ಬೆಳ್ಳಾರೆಗೆ ತನ್ನ ಟಿಕೆಟ್ ಘೋಷಣೆ ಮಾಡಿ ತಮ್ಮ ಪಕ್ಷದಲ್ಲಿ ಜಿಹಾದಿಗಳಿಗೆ, ಕೊಲೆಗಡುಕರಿಗೆ ಮಾತ್ರ ಸ್ಥಾನ ಎಂಬುದನ್ನು ಪಕ್ಷ ಸಾಬೀತುಪಡಿಸಿದೆ. ಈ ಶಾಫಿಯ ಮೇಲೆ ಗಂಭೀರ ಕೊಲೆ ಪ್ರಕರಣದ ಕೇಸ್ ಇದ್ದು ಯಾವುದೇ ಕಾರಣಕ್ಕೂ ಈ ಚುನಾವಣೆಗೆ ನಿಲ್ಲುವುದಕ್ಕೆ ಚುನಾವಣಾ ಆಯೋಗ ಅವಕಾಶ ನೀಡಬಾರದು ಎಂಬುದು ನನ್ನ ಆಗ್ರಹ ಎಂದು ಅವರು ಟ್ವೀಟ್ ಮಾಡಿದ್ದಾರೆ.