ತಿಂಗಳಾಡಿ: ಮುಅಲ್ಲಿಂ ಡೇ ಪ್ರಯುಕ್ತ ಉಸ್ತಾದರಿಗೆ ಗೌರವಾರ್ಪಣೆ

ಪುತ್ತೂರು: ಸಮಸ್ತ ಕೇರಳ ಇಸ್ಲಾಂ ವಿಧ್ಯಾಭ್ಯಾಸ ಬೋರ್ಡ್ ನಿರ್ದೇಶನದ ಮೇರೆಗೆ ಆಚರಿಸುತ್ತಿರುವ ಮುಅಲ್ಲಿಂ ಡೇ ಆಚರಣೆ ಕಾರ್ಯಕ್ರಮ ತಿಂಗಳಾಡಿ ಶಂಸುಲ್ ಎಜುಕೇಷನ್ ಸೆಂಟರ್ ಸಂಸ್ಥೆಯಲ್ಲಿ ನಡೆಯಿತು. ಸಂಸ್ಥೆಯ ಉಸ್ತಾದರುಗಳಾದ ಅಬ್ದುಲ್ ಸತ್ತಾರ್ ಕೌಸರಿ , ಉಮ್ಮರ್ ಅಝ್ಹರಿ ಶಾಲುಹೊದಿಸಿ , ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಂಸ್ಥೆಯ ಅದ್ಯಕ್ಷರಾದ ಸಿದ್ದೀಕ್ ಸುಲ್ತಾನ್ ಅದ್ಯಕ್ಷತೆ ವಹಿಸಿದ್ದರು. ಗೌರವಾದ್ಯಕ್ಷರಾದ ಮಹಮ್ಮದ್ ಹಾಜಿ ಸಂತೋಷ್, ಉಪಾದ್ಯಕ್ಷರಾದ ಮಹಮ್ಮದ್ ಕುಂಞಿ ಪಟ್ಟೆ , ಕಾರ್ಯದರ್ಶಿ ಇಬ್ರಾಹಿಂ ಹಾಜಿ ದರ್ಬೆ , ಅಬ್ದುಲ್ಲ ಪಟ್ಟೆ , ನಿರ್ದೇಶಕರಾದ ಅಬ್ದುಲ್ ರಝಾಕ್ ದರ್ಬೆ , ಲತೀಫ್ ಆದ್ರೋಡಿ , ಲತೀಫ್ ಅಂಙನ್ತಡ್ಕ , ಪೋಷಕರಾದ ಕಾಸಿಂ ತಿಂಗಳಾಡಿ , ಅಬ್ದುಲ್ಲ ಕೈಕಾರ ಹಾಗೂಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.