ಕುಂಬ್ರದಲ್ಲಿ ನಡೆಯುವ SKSSF ಮಾನವ ಸರಪಳಿಗೆ ಉಸ್ತುವಾರಿ ಸಚಿವಗೆ ಆಹ್ವಾನ
ಪುತ್ತೂರು: ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಜ.26ರಂದು ಕುಂಬ್ರದಲ್ಲಿ ಬೃಹತ್ ಮಾನವ ಸರಪಳಿ ನಡೆಯಲಿದೆ.

ಜ.18ರಂದು ಮಂಗಳೂರು ಸರ್ಕ್ಯೂಟ್ ಹೌಸಿನಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾದ ಎಸ್ಕೆಎಸ್ಸೆಸ್ಸೆಫ್ ನಿಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಆಹ್ವಾನವನ್ನು ನೀಡಿದರು. ಈ ಸಂದರ್ಭದಲ್ಲಿ ಮಾನವ ಸರಪಳಿ ಸ್ವಾಗತ ಸಮಿತಿಯ ಚೇರ್ಮೆನ್ ಮಹಮ್ಮದ್ ಕೆ ಎಚ್, ಜಿಲ್ಲಾ ವಿಖಾಯ ಚೇರ್ಮೆನ್ ಅಶ್ರಫ್ ಶೇಡಿಗುಂಡಿ, ಸ್ವಾಗತ ಸಮಿತಿ ವರ್ಕಿಂಗ್ ಕಾರ್ಯದರ್ಶಿ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಮತ್ತಿತರರು ಉಪಸ್ಥಿತರಿದ್ದರು.