ಕರಾವಳಿ

ಕುಡಿಯುವ ನೀರಿಗಾಗಿ ಜಟ್ಟಿಪಳ್ಳ ನಿವಾಸಿಗಳಿಂದ ಸುಳ್ಯ ನ.ಪಂ ಎದುರು ಪ್ರತಿಭಟನೆ




ಸುಳ್ಯ ಜಟ್ಟಿಪಳ್ಳ ಭಾಗದಲ್ಲಿ ಕಳೆದ 6 ತಿಂಗಳಿನಿಂದ ನೀರಿನ ಸಮಸ್ಯೆ ಉಂಟಾಗಿದ್ದು, ನೀರಿನ ಸಮಸ್ಯೆ ಸರಿಪಡಿಸುವಂತೆ ಜಟ್ಟಿಪಳ್ಳ ನಿವಾಸಿಗಳು ಸುಳ್ಯ ನಗರ ಪಂಚಾಯತ್ ಎದುರು ಫೆ.14ರಂದು ಪ್ರತಿಭಟನೆ ನಡೆಸಿದರು.


ನೀರಿನ ಸಮಸ್ಯೆ ಇರುವ ಬಗ್ಗೆ ನಾವು ಸಂಬಂಧಪಟ್ಟ ಅಧಿಕಾರಿಗಳ ಬಳಿ ಹೇಳಿದಾಗ ಮೋಟಾರ್ ರಿಪೇರಿ ಆಗಿದೆ, ನೂತನ ಪೈಪ್ಲೈನ್ ಮಾಡುತ್ತಾ ಇದ್ದೇವೆ ಎಂದೆಲ್ಲ ಮಾತುಗಳನ್ನು ಹೇಳಿ ನಮ್ಮನ್ನು ಸರಿಪಡಿಸುತ್ತಾರೆ.
ಕಳೆದ ನಾಲ್ಕು ದಿನಗಳಿಂದ ನೀರು ಬರುತ್ತಿಲ್ಲ, ಕೇಳಿದಾಗ ಅಧಿಕಾರಿಗಳು ಉಡಾಫೆಯ ಉತ್ತರ ನೀಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.



ಈ ಸಮಯದಲ್ಲಿ ನಗರ ಪಂಚಾಯತ್ ಸಭಾಭವನದಲ್ಲಿ ನಗರ ಪಂಚಾಯತ್ ಸಾಮಾನ್ಯ ಸಭೆ ನಡೆಯುತ್ತಿದ್ದು ಸಭೆಯ ಬಳಿಕ ನಗರ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರುಗಳು ಪ್ರತಿಭಟನಾಕಾರರ ಬಳಿ ಬಂದು ವಿಚಾರಿಸಿದಾಗ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.


ಬಳಿಕ ಅಧ್ಯಕ್ಷರು ತಾತ್ಕಾಲಿಕವಾಗಿ ನೀರಿನ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುವ ಬಗ್ಗೆ ಭರವಸೆಯನ್ನು ನೀಡಿದ್ದು , ಬಳಿಕ 4 ದಿನಗಳಲ್ಲಿ ಶಾಶ್ವತ ಪರಿಹಾರವನ್ನು ಒದಗಿಸುವ ವಿಶ್ವಾಸವನ್ನು ನೀಡಿದ್ದಾರೆ.
ಬಳಿಕ ಪ್ರತಿಭಟನಾಕಾರರು ಸ್ಥಳದಿಂದ ತೆರಳಿದ್ದಾರೆ.
ಪ್ರತಿಭಟನೆಯಲ್ಲಿ ರಶೀದ್ ಜಟ್ಟಿಪಳ್ಳ, ಖಲಂದರ್ ಎಲಿಮಲೆ, ಅಬ್ದುಲ್ ರಝಾಕ್, ಶಿಯಾಬ್, ಝೌರ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!