ಕರಾವಳಿ

ಸುಳ್ಯ ನ್ಯೂಸ್ ಬೈಟ್ ವರದಿಗೆ ಸ್ಪಂದಿಸಿದ ಮೆಸ್ಕಾಂ ಇಲಾಖೆ: ವರದಿ ಪ್ರಕಟಗೊಂಡ ಒಂದೇ ದಿನದಲ್ಲಿ ವಿದ್ಯುತ್ ತಂತಿಯ ಮೇಲಿನ ಕಾಡು ಬಳ್ಳಿಗಳ ತೆರವು



ಸುಳ್ಯ ಮೊಗರ್ಪಣೆ ಬಳಿ ವಿದ್ಯುತ್ ತಂತಿಗೆ ಬೃಹತ್ ಕಾಡುಬಳ್ಳಿಗಳು ಹಬ್ಬಿದ್ದು ಇದರಿಂದ ವಾಹನಗಳಿಗೆ ಅಪಾಯ ಉಂಟಾಗುವ ವರದಿಯನ್ನು ನಿನ್ನೆಯ ದಿನ ನ್ಯೂಸ್ ಬೈಟ್ ವೆಬ್ ಸೈಟಿನಲ್ಲಿ ವರದಿ ಮಾಡಲಾಗಿತ್ತು.

ಈ ವರದಿಗೆ ಸ್ಪಂದಿಸಿರುವ ಸುಳ್ಯ ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಇಂದು ಸ್ಥಳಕ್ಕೆ ತೆರಳಿ ವಿದ್ಯುತ್ ತಂತಿಯ ಮೇಲೆ ಆವರಿಸಿದ ಕಾಡು ಬಳ್ಳಿಗಳನ್ನು ಮತ್ತು ಸ್ಥಳೀಯ ಪರಿಸರದ ಕಾಡು ಗಿಡಗಳನ್ನು ಕಡಿದು ಸ್ವಚ್ಛಪಡಿಸಿ ಮುಂದೆ ಉಂಟಾಗಬಹುದಾಗಿದ್ದ ಅಪಾಯವನ್ನು ತಪ್ಪಿಸಿದ್ದಾರೆ. ಮೆಸ್ಕಾಂ ಇಲಾಖೆಯ ಸಕಾಲಿಕ ಸ್ಪಂದನೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!