ಕರಾವಳಿ

2 ವರ್ಷದೊಳಗೆ ಕಬಕ-ವಿಟ್ಲ ರಸ್ತೆ ಚತುಷ್ಪಥ: ಶಾಸಕ ಅಶೋಕ್ ರೈ


ಪುತ್ತೂರು: ಮುಂದಿನ ಎರಡು ವರ್ಷದೊಳಗೆ ಕಬಕ- ವಿಟ್ಲ‌ ರಸ್ತೆಯನ್ನು ಚತುಷ್ಫಥ ರಸ್ತೆಯನ್ನಾಗಿ‌ ಮೇಲ್ದರ್ಜೆಗೇರಿಸಲಾಗುವುದು ಎಂದು ಶಾಸಕ ಅಶೋಕ್ ರೈ ಹೇಳಿದರು. ಅವರು ವಿಟ್ಲ ಪಿಎಂ ಶ್ರೀ ಹಿ ಪ್ರಾ‌ಶಾಲೆಯಲ್ಲಿ ನಡೆದ ಜಿಲ್ಲಾ‌ ಮಟ್ಟದ‌ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ‌ ಮಾತನಾಡಿದರು.


ಸುಮಾರು‌ 60 ಕೋಟಿ ವೆಚ್ಚದಲ್ಲಿ ಈ ರಸ್ತೆಯನ್ನು‌ಅಭಿವೃದ್ದಿ ಮಾಡುವ ಬಗ್ಗೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ರಸ್ತೆ ಚತುಷ್ಪಥ ಆಗಬೇಕು ಎಂಬುದು ನನ್ನ ಕನಸಾಗಿದ್ದು ಅದನ್ನು ಖಂಡಿತವಾಗಿಯೂ ಮಾಡೇ ಮಾಡುತ್ತೇನೆ ಆ ಮೂಲಕ ವಿಟ್ಲ ಭಾಗವನ್ನು ಅಭಿವೃದ್ದಿ ಮಾಡಲಾಗುವುದು ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!