ಕರಾವಳಿ

ಪುತ್ತೂರು: ಮಾಜಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಯಾಕೆ? ಎಸ್ ಡಿ ಪಿ ಐ


ಪುತ್ತೂರು: ಬಿಜೆಪಿ ಪ್ರತಿಭಟನೆಯ ವೇಳೆ ಪುತ್ತೂರಿನಲ್ಲಿ ಪೋಲಿಸರನ್ನು ಅವಾಚ್ಯ ಶಬ್ದಗಳಿಂದ ಬೈದು, ಪೋಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮಾಜಿ ಶಾಸಕ ಬಿಜೆಪಿ ಮುಖಂಡ ಸಂಜೀವ ಮಠಂದೂರುರವರ ಮೇಲೆ ಪೋಲಿಸ್  ಇಲಾಖೆ ಯಾಕಾಗಿ ಎಫ್.ಐ.ಆರ್ ದಾಖಲಿಸಿ ಬಂಧಿಸಿಲ್ಲ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್ ಬಾವು ಪ್ರಶ್ನಿಸಿದ್ದಾರೆ.


ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಠಿಸಿ, ಗೂಂಡಾಗಿರಿಯನ್ನು ಬಿಜೆಪಿ ಮುಖಂಡರು ಮಾಡುತ್ತಿದ್ದು ಮುಂದುವರೆದು ಇದೀಗ ಪೋಲಿಸರ ಮೇಲೆಯೇ ತಮ್ಮ ದರ್ಪವನ್ನು ತೋರಿಸುವ ಮಟ್ಟಕ್ಕೆ ಬೆಳೆದು, ಪೋಲಿಸರ ಮೇಲೆಯೇ ಹಲ್ಲೆಗೆ ಮುಂದಾದವರು ಪೋಲಿಸ್ ಇಲಾಖೆ ಕ್ರಮ ಕೈಗೊಳ್ಳದೆ ಮೌನ ವಹಿಸುವುದರ ಹಿಂದಿನ ಮರ್ಮವೇನು ಎಂದು ಅವರು ಪ್ರಶ್ನಿಸಿದ್ದಾರೆ.
ಒಂದು ವೇಳೆ ಇತರ ಪಕ್ಷದವರು ಅಥವಾ ಆಡಳಿತ ಪಕ್ಷದ ಕಾರ್ಯಕರ್ತರೇ  ಈ ರೀತಿಯಾಗಿ ವರ್ತಿಸಿದ್ದರೆ ಪೋಲಿಸ್ ಇಲಾಖೆ ಸುಮ್ಮನಿರುತ್ತಿತ್ತೆ, ಎಂದು  ಅವರು ಪ್ರಶ್ನಿಸಿದ್ದಾರೆ.


ಜವಾಬ್ದಾರಿಯುತ ಸ್ಥಾನದಲ್ಲಿದ್ದ ಮಾಜಿ ಶಾಸಕರೇ ಈ ರೀತಿ ಪೋಲಿಸರನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಅವರ ಸಂಸ್ಕೃತಿಯನ್ನು ತೋರ್ಪಡಿಸುತ್ತಿದೆ ಎಂದ ಅವರು
  ಪೋಲಿಸ್ ಇಲಾಖೆ ಕೂಡಲೇ ಮಾಜಿ ಶಾಸಕ ಮಠಂದೂರು ಹಾಗೂ ಪ್ರತಿಭಟನೆಯ ಆಯೋಜಕರ ಮೇಲೆ FIR ದಾಖಲಿಸಿ ಬಂಧಿಸಬೇಕೆಂದು  ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!