ಮುಂಡೂರು: ಪಟ್ಟೆಯಲ್ಲಿ ಜಾಗದ ವಿಚಾರದಲ್ಲಿ ಹಲ್ಲೆ: ಓರ್ವ ಗಂಭೀರ
ಪುತ್ತೂರು: ಮುಂಡೂರು ಪಟ್ಟೆ ಎಂಬಲ್ಲಿ ಜಾಗದ ವಿಚಾರಕ್ಕೆ ಸಂಬಂಧಿಸಿ ಹೊಡೆದಾಟ ನಡೆದಿದ್ದು ಹಲ್ಲೆಯಿಂದ ಅಶ್ರಫ್ ಪಟ್ಟೆ ಎನ್ನುವವರು ಗಂಭೀರ ಗಾಯಗೊಂಡಿರುವ ಬಗ್ಗೆ ಇಂದು ಸಂಜೆ ವರದಿಯಾಗಿದೆ.

ಅಶ್ರಫ್ ಪಟ್ಟೆ ಅವರನ್ನು ಪುತ್ತೂರು ಅಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಅಶ್ರಫ್ ಪಟ್ಟೆ ಮತ್ತು ಸ್ಥಳೀಯ ಕೆಲವರ ಮಧ್ಯೆ ಜಾಗದ ವಿಚಾರವಾಗಿ ಗಲಾಟೆ ಆಗಿದ್ದು ಈ ವೇಳೆ ನಡೆದ ಹಲ್ಲೆಯಿಂದ ಅಶ್ರಫ್ ಪಟ್ಟೆ ಅವರಿಗೆ ತೀವ್ರ ಗಾಯವಾಗಿರುವುದಾಗಿ ತಿಳಿದು ಬಂದಿದೆ.
ದಫನ ಭೂಮಿ ವಿಚಾರದಲ್ಲಿ ಗಲಾಟೆ ನಡೆದಿದೆ ಎನ್ನಲಾಗುತ್ತಿದೆಯಾದರೂ ಸ್ಪಷ್ಟ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.