ಮದುವೆ ನಿಶ್ಚಯಗೊಂಡಿದ್ದ ಚಾಂದ್ ಸುಲ್ತಾನಾಳನ್ನು ಕೊಲೆ ಮಾಡಿ ವಿಷ ಸೇವಿಸಿದ್ದ ಯುವಕ ಸಾವು
ದಾವಣಗೆರೆ: ತಾನು ಮದುವೆಯಾಗಲು ಬಯಸಿದ ಯುವತಿ ಬೇರೆಯವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಯುವತಿಯನ್ನು ಕೊಲೆ ಮಾಡಿದ್ದ ಯುವಕ ಸೈಯದ್ ಸಾದತ್ (29. ವ) ಮೃತಪಟ್ಟಿದ್ದಾರೆ.
ಹರಿಹರದ ಇಮಾಮ್ ಮೊಹಲ್ಲಾದ ನಿವಾಸಿಯಾದ ಸೈಯದ್ ಸಾದತ್, ಬೇರೊಬ್ಬ ಯುವಕನ ಜೊತೆ ಮದುವೆ ನಿಶ್ಚಯವಾಗಿದ್ದ ಚಾಂದ್ ಸುಲ್ತಾನಾ (28. ವ) ಅವರನ್ನು ಕೊಲೆ ಮಾಡಿ, ಆ ಬಳಿಕ ವಿಷ ಸೇವಿಸಿದ್ದರು. ನಂತರ ಚಿಕಿತ್ಸೆಗಾಗಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾನೆ.