ಕರಾವಳಿರಾಜ್ಯ

ಕೆಂಪು ಕಲ್ಲು‌ ಗಣಿಗಾರಿಕೆ
ಕಠಿಣ ಕಾನೂನನ್ನು ಸಡಿಲಿಕೆ ಮಾಡಲು ಗೃಹ‌ ಸಚಿವರಿಗೆ ಅಶೋಕ್ ರೈ ಮನವಿ


ಪುತ್ತೂರು: ಜಿಲ್ಲೆಯಲ್ಲಿ ಕೆಂಪು ಕಲ್ಲು ಗಣಿಗಾರಿಕೆಯ ವಿಚಾರದಲ್ಲಿ ಕಾನೂನು ಟೈಟ್‌ ಮಾಡಲಾಗಿದೆ, ಅದನ್ನು ಸ್ವಲ್ಪ ಸಡಿಲಿಕೆ ಮಾಡಿ ಎಂದು ಶಾಸಕ ಅಶೋಕ್ ರೈ ಗೃಹ ಸಚಿವ ಡಾ.ಜಿ ಪರಮೇಶ್ಚರ್ ಅವರಲ್ಲಿ‌ ವಿನಂತಿಸಿದರು.


ಕೆಂಪು ಕಲ್ಲು‌ಗಣಿಗಾರಿಕೆ‌ಕಾನೂನು ಟೈಟ್ ಆಗಿರುವ ಕಾರಣ ಬಡವರಿಗೆ ಮನೆ ಕಟ್ಟಲು ಕಷ್ಟ ಸಾಧ್ಯವಾಗಿದೆ. ಗ್ರಾಮಾಂತರ ಜನರು ಇದರಿಂದ ಸಂಕಷ್ಟ ಎದುರಿಸುವಂತಾಗಿದೆ, ಅನೇಕ‌ ಮಂದಿ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ ಎಂದು ಸಚಿವರ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಸಚಿವರು ಈ ವಿಚಾರದಲ್ಲಿ ನೀವು ಗಣಿ ಇಲಾಖೆ ಸಚಿವರಲ್ಲಿ ಮಾತನಾಡಿ ಅವರ ಗಮನಕ್ಕೆ ತನ್ನಿ, ನೀವು ಆಡಳಿತ ಪಕ್ಷದ ಶಾಸಕರಿದ್ದೀರಿ ಮಾತನಾಡಿ ಸರಿಪಡಿಸಿಕೊಳ್ಳಿ, ನೀವು ಹುಷಾರಿದ್ದೀರಿ ಎಂದು ಸಚಿವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!