ಕರಾವಳಿ

ರಾಜ್ಯ ಮಟ್ಟದ ವೈಟ್ ಲಿಫ್ಟ್ ಚಿನ್ನದ ಪದಕ ವಿಜೇತೆ ಸ್ಪಂದನಾರಿಗೆ ಶಾಸಕರಿಂದ ಸನ್ಮಾನ




ಪುತ್ತೂರು: ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ವೈಟ್ ಲಿಫ್ಟ್ ಸ್ಪರ್ದೆಯಲ್ಲಿ ಜ್ಯೂನಿಯರ್ ಮತ್ತು ಸೀನಿಯರ್ ವಿಭಾಗದ ಸ್ಪರ್ದೆಯಲ್ಲಿ‌ ಚಿನ್ನದ ಪದಕ ವಿಜೇತೆ ಸ್ಪಂದನಾ ಕೆ ಪುಣಚಾ ಅವರನ್ನು ಶಾಸಕ ಅಶೋಕ್ ರೈ ಅವರು ತಮ್ಮ ಕಚೇರಿಯಲ್ಲಿ ಸನ್ಮಾನಿಸಿದರು.‌


ಆ.17/18 ರಂದು ನಡೆದ ರಾಜ್ಯಮಟ್ಟದ ಈ ಸ್ಪರ್ದೆಯಲ್ಲಿ 45 ಕೆ ಜಿ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ ಮತ್ತು ಬೆಸ್ಟ್ ವೈಟರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇವರು ಪುತ್ತೂರು ಸಂತಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು ಪುಣಚ ಗ್ರಾಮದ ಕುರುಡ ಕಟ್ಟೆ ದೇವಪ್ಪ ಗೌಡ ಮತ್ತು ಜಯಶೀಲಾ ದಂಪತಿಗಳ ಪುತ್ರಿ.

Leave a Reply

Your email address will not be published. Required fields are marked *

error: Content is protected !!